ಜಾನಕಿ ಕಲ್ಲಾಗಿ ಬಿಟ್ಟಿದಳು
ಜನಕನ ಪ್ರೀತಿಯ ಪುತ್ರಿಯಾಗಿ ಕಷ್ಟದ ಪರಿಚಯವೇ
ಇಲ್ಲದೆ ಬೆಳದ ಜಾನಕಿಗೆ
ಸ್ವಯಂ ವರದಲ್ಲಿ ಗೆದ್ದ ರಾಮನ ಜೊತೆ ಹೆಜ್ಜೆ ಹಾಕುವಾಗ
ಪ್ರಪಂಚದಲ್ಲಿ ತನ್ನಷ್ಟು ಸುಖಿ ಯಾರಿರಲಾರರೆಂದು ಬೀಗಿದಳು
ಕೈಕೇಯಿಯ ಸ್ವ್ವಾರ್ಥಕೆ ದಶರಥನ ಹೇಡಿಥನಕೆ ಬಲಿಯಾಗಿ ವನವಾಸಕ್ಕೆ ಹೊರತು ನಿಂತ ರಾಮನ ನಿಸ್ಸಹಾಯಕಥೆಗೆ
ಜಾನಕಿ ಕಲ್ಲಾಗಿ ಬಿಟ್ಟಿದಳು
ಬಂಗಾರದ ಜಿಂಕೆಯ ಮೋಹಕ್ಕೆ ಒಳಗಾಗಿ
ರಾವಣನ ಅಪರಣಕ್ಕೆ ಸಿಲುಕಿದಾಗ ಕೊಡ ದರ್ಬೆಯನ್ನು
ಸಾಕ್ಷಿಯಾಗಿ ಹಿಡಿದಿದ್ದಳು
ಅಶೋಕವನದಲ್ಲಿ ಒಂಟಿಯಾಗಿ ಕುಳಿತ ಸೀತೆಗೆ
ಮಾಂಡವಿ, ಉರ್ಮಿಳೆಯರು ಬಗ್ಗೆ ನೆನಯುತ್ತ ತನ್ನ
ಹಣೆಬರವನ್ನು ಹಳಿಯುತ್ತಾ ಕಂಬನಿ ಮಿಡಿಯುತ್ತ
ಜಾನಕಿ ಕಲ್ಲಾಗಿ ಬಿಟ್ಟಿದಳು
ವಾಲಿಯ ವಧೆಯಾಗಿ ಸುಗ್ರೀವನ ಕ್ಯಗೆ ಅದಿಕಾರ ಹೋದ
ಬಳಿಕ ಅದಿಕಾರದ ಮದದಲ್ಲಿ ಕೊಟ್ಟ ಮಾತು ಮರೆತು
ವಾಲಿಯ ಮಡದಿ ತಾರಳೊಂದಿಗೆ ತೆಕ್ಕೆ ಹಾಕಿದ
ಅಣ್ಣ ರಾವನಣನು ತೊರೆದು ವಿಬಿಷಣ ರಾಮನ ಪಾಳೆಯ ಸೇರಿದ
ಸುದ್ದಿ ಕೇಳಿ ಜಾನಕಿ ಕಲ್ಲಾಗಿ ಬಿಟ್ಟಿದಳು
ರಾವಣನನ್ನು ಕೊಂದು
ಲಂಕವನ್ನು ಜಯಸಿದ ರಾಮನ ಜೊತೆ ಅಯೋದ್ಯೆಗೆ ಹೊರಟ
ಜಾನಕಿಯ ಶೀಲ ಶಂಕಿಸಿದ ಯಕಸ್ಹಿತ್ ಪಾಮರನ ಮಾತಿಗೆ ಕಟ್ಟು ಬಿದ್ದ ರಾಮ ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮನ
ನಡೆತೆಗೆ ಜಾನಕಿ ಕಲ್ಲಾಗಿ ಬಿಟ್ಟಿದಳು
ಅಗ್ನಿ ಪರೀಕ್ಷೆಯ ಸತ್ವ ಪರೀಕ್ಷೆಯಲ್ಲಿ ಗೆದ್ದ
ಸೀತೆ ಪುನೀಥೆ ಎಂದ ಕೊಂಡಾಡಿದ ಪ್ರಪಂಚದ ಮಾತಿಗೆ
ಜಾನಕಿ ಮರುಳಾದರು ಮಾತೃವಿನ ಒಡಲು ಉರಿದು ಹೋಯಿತು ಜಾನಕಿ ರಾಮನ
ಕೈ ಹಿಡಿದಾಗಿನಿಂದ ಪಟ್ಟ ಸುಖವೆಷ್ಟು
ಜಾನಕಿಯ ಜೀವನದಲ್ಲಿ ಶಾಪವಾದ ಹೆಣ್ಣುಗಳ ಸ್ವಾರ್ಥಕ್ಕೆ , ಗಂಡಿನ ಲೋಲುಪತೆಗೆ , ಸಂಶಯಕ್ಕೆ , ಶಿಕ್ಷೆಗೆ ಗುರಿಯಾದ
ಜಾನಕಿಯನ್ನು ತನ್ನ ಒದಲಾಲಕ್ಕೆ ಸೆಳೆದುಕೊಂಡ ಭೂಮಿ ತಾಯಿಯ ಮಾತೃತ್ವದ ಪ್ರೀತಿಗೆ ಜಾನಕಿ ಕಲ್ಲಾಗಿ ಬಿಟ್ಟಿದಳು